ಅರಳುತಿದ್ದ ಮೊಗ್ಗು

ಅರಳುತ್ತಿದ್ದ ಮೊಗ್ಗು
ಮುದುಡಿ ಹೋಯಿತಲ್ಲ
ಕಾಣುತಿದ್ದ ಕನಸು
ಕರಗಿ ಹೋಯಿತಲ್ಲ /ಪ//

ಪುಟ್ಟ ಬೆರಳುಗಳು ಬಿಡಿಸುತ್ತಿದ್ದ
ಅಕ್ಷರಗಳ ರಂಗೋಲಿ
ಅರವಿನ ಬಣ್ಣವ ಪಡೆಯುವ ಮೊದಲೆ
ಕದಡಿ ಹೋಯಿತಿಲ್ಲಿ
ಕದಡಿ ಹೋಯಿತಿಲ್ಲಿ – ತಾಳಿಯ
ನೊಗದ ಭಾರದಲ್ಲಿ

ಮುತ್ತೈದೆ ಎಂದರೆ ಏನೆಂದು
ತಿಳಿವುದಕ್ಕೆ ಮೊದಲೆ
ಮುತ್ತೈದೆ ತಾನಾಗಿ ಹೋಗಿರೆ
ಏನು ಇದಕೆ ಅರ್ಥ
ಏನು ಇದಕೆ ಅರ್ಥ – ಹೇಳಿ
ಇದು ಯಾರ ಸ್ವಾರ್ಥ?

ಕುಣಿದಾಡುವ ಹೆಜ್ಜೆಗಳು ತುಳಿದಿರೆ
ಅಗ್ನಿ ಸುತ್ತಲಿನ ಸಪ್ತಪದಿ
ಹಾರಿದ ಕಿಡಿಗಳು ಅವರನು ಸೋಕಿ
ಹೊರ ಹಾಕದೆ ಒಳ ಬೇಗುದಿ
ಹೊರ ಹಾಕದೆ ಒಳ ಬೇಗುದಿ
ಅರಿಯಿರಿ ಇದರ ಎಲ್ಲ ಬದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಥಿಲೀ
Next post ಆಗ್ರಹ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys